ಕರುಣಾಳು (ಇಬುಕ್)

ಕರುಣಾಳು (ಇಬುಕ್)

Regular price
$1.99
Sale price
$1.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಕಸದ ತೊಟ್ಟಿಯಲಿ ಹಸುಗೂಸು

ಇನ್ನೂ ಇನ್ನೂ

ಹರಿದಂತಿಲ್ಲ ತಾಯಮಾಸು

 

ಜನಸಂದಣಿಯನು ತೂರಿ

ನಿಡಿದಾದ ತೋಳುಗಳ ಚಾಚಿ

ಬಾಚಿದಳು ಮಿಷನ್ ಆಸ್ಪತ್ರೆಯ ಮೇರಿ

ಗುಸಗುಸ ಪಿಸಪಿಸ

ಅವಳಿನ್ನೂ ಕುಮಾರಿ!

 

ಮುದ್ದನುಕ್ಕಿಸುತಿದೆ ಹಸುಗೂಸು

ಸಂಶಯವೇ ಇಲ್ಲ ಬಾಲಯೇಸು

ಕಂಡಳು, ಎತ್ತಿಕೊಂಡಳು

ಎದೆಗೆ ಒತ್ತಿಕೊಂಡಳು

ತಾಯಿ ಅವಳು ಕರುಣಾಳು.

 

ಸವಿತಾ ನಾಗಭೂಷಣ ಅವರು 11 ಮೇ 1961ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ಶಿವಮೊಗ್ಗಾದಲ್ಲಿ ಪದವಿ ಪೂರೈಸಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅವರು ಮುಕ್ತವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಕಾಲೀನ ಕನ್ನಡ ಕಾವ್ಯದ ಪ್ರಮುಖರಲ್ಲೊಬ್ಬರೆಂದು ಪರಿಗಣಿತವಾಗಿರುವ ಇವರು 'ಸ್ತ್ರೀಲೋಕ' ಎಂಬ ವಿಶಿಷ್ಟ ರೂಪದ ಕಾದಂಬರಿಯನ್ನೂ ರಚಿಸಿದ್ದಾರೆ. 'ನಾ ಬರುತ್ತೇನೆ ಕೇಳು', 'ಚಂದ್ರನನ್ನು ಕರೆಯಿರಿ ಭೂಮಿಗೆ', 'ಹೊಳೆಮಗಳು', 'ಜಾತ್ರೆಯಲ್ಲಿ ಶಿವ', 'ದರುಶನ' - ಇವು ಇದುವರೆಗೆ ಪ್ರಕಟವಾಗಿರುವ ಅವರ ಕವನಸಂಕಲನಗಳು. 'ಆಕಾಶ ಮಲ್ಲಿಗೆ', 'ಕಾಡು ಲಿಲ್ಲಿ ಹೂವುಗಳು' - ಎಂಬ ಇವರ ಎರಡು ಕವಿತಾ ಸಂಕಲನಗಳೂ ಈವರೆಗೆ ಹೊರಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಬಹುಮಾನ, ಎಂ.ಕೆ. ಇಂದಿರಾ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯಪ್ರಶಸ್ತಿ, ವಾರಂಬಳ್ಳಿ ಕಾವ್ಯಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯಪ್ರಶಸ್ತಿ ಮೊದಲಾದ ಹಲವು ಮನ್ನಣೆಗಳಿಗೆ ಪಾತ್ರರಾಗಿರುವ ಇವರು ಸದ್ಯ ಸ್ವಯಮಿಚ್ಛೆಯ ನಿವೃತ್ತಿ ಪಡೆದು ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ.

 

ಪುಟಗಳು: 53

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !