
ಕನ್ನಡಪ್ರಭ ದೈನಿಕದಲ್ಲಿ ಪ್ರಾರಂಭವಾದ ‘ಒಳಗನ್ನಡಿ’ ಅಂಕಣ ಮಾಲಿಕೆಯ ನಾಲ್ಕನೇ ಹಾಗೂ ಕಡೆಯ ಕೃತಿಯಿದು. ತೃಣಮಾತ್ರ ಕೃತಿಯಲ್ಲಿ ಸುಮಾರು 141 ಲೇಖನಗಳಿದ್ದು, ಲೇಖಕರು ಹೇಳುವಂತೆ, ದೇವ ದೇಶ ಹಾಗೂ ದೇಹಗಳ ಕುರಿತು ಸ್ಫುಟವಾಗಿ ರಚಿತವಾಗಿವೆ. ಇವುಗಳ ಓದು ಅನಾಯಾಸ. ಆದರೆ ಈ ಬರಹಗಳು ಓದುಗನನ್ನು ಚಿಂತನೆಗೆ ಹಚ್ಚುವ ಕ್ರಮ, ಹಿಡಿದಿಟ್ಟು ಓದಿಸಿಕೊಳ್ಳುವ ಗುಣ- ಮೆಚ್ಚುಗೆಯಾಗಿವೆ. ಬಸ್ಸಿಗಾಗಿ ಕಾಯುವಾಗಲೋ, ಅರೆಘಳಿಗೆ ಬಿಡುವಿದ್ದಾಗಲೋ, ರಾತ್ರಿ ಮಲಗುವ ಮುನ್ನ ಗುಳಿಗೆಯಂತೆ ತೆಗೆದುಕೊಳ್ಳಬಹುದು. Happy reading!
ಪುಟಗಳು : 156