ಬದುಕು ಬದಲಿಸಬಹುದು (ಆಡಿಯೋ ಬುಕ್)

ಬದುಕು ಬದಲಿಸಬಹುದು (ಆಡಿಯೋ ಬುಕ್)

Regular price
$9.99
Sale price
$9.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ.

ಓದಿದವರು

ನೇಮಿಚಂದ್ರ

 

ನಿರ್ಮಾಣ ಸಹಾಯ : ಧ್ವನಿಧಾರೆ ತಂಡ

ಆಡಿಯೋ ಪುಸ್ತಕದ ಅವಧಿ : 7 ಗಂಟೆಗಳು

 

ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯ ಆಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಇವರ ‘ನೋವಿಗದ್ದಿದ ಕುಂಚ, ‘ಪೆರುವಿನ ಪವಿತ್ರ ಕಣಿವೆಯಲ್ಲಿ, ‘ಯಾದ್ ವಶೇಮ್, ‘ದುಡಿವ ಹಾದಿಯಲಿ ಜೊತೆಯಾಗಿ, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ‘ಬದುಕು ಬದಲಿಸಿದ ಭಾವೇಶ್ ಭಾಟಿಯಾ, ‘ಸಾವೇ ಬರುವುದಿದ್ದರೆ ನಾಳೆ ಬಾ!’ (ಬದುಕು ಬದಲಿಸ ಬಹುದು, ಭಾಗ-೨), ‘ಸೋಲೆಂಬುದು ಅಲ್ಪವಿರಾಮ’(ಬದುಕು ಬದಲಿಸಬಹುದು, ಭಾಗ-೩) ಮತ್ತು ‘ಸಂತಸ, ನನ್ನೆದೆಯ ಹಾಡು ಹಕ್ಕಿ’(ಬದುಕು ಬದಲಿಸಬಹುದು, ಭಾಗ-೪) ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

ಅಧ್ಯಾಯಗಳು

  1. ಸಮಯವಿಲ್ಲವೆ ಹೇಳಿ
  2. ಕನಸು ಕಾಣುವ ಬನ್ನಿ
  3. ಸ್ನೇಹಕ್ಕೆ ಯಾವ ಸರಹದ್ದು
  4. ಸೋಲಿಲ್ಲದ ಮನೆಯ ಸಾಸಿವೆ
  5. ಜಗತ್ತು ಬದಲಾಗಬಹುದು
  6. ಆಯ್ಕೆಯಿದೆ ನಮ್ಮ ಕೈಯಲ್ಲಿ
  7. ಬರೆದಿಡಿ... ಬರೆದಿಡಿ
  8. ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
  9. ಬದುಕು ಮುಗಿಯುವುದಿಲ್ಲ ಅಲ್ಲಿಗೇ
  10. ಮುಗಿಲು ಕೂಡ ಮಿತಿಯಲ್ಲ
  11. ಅವರೊಂದು ಉದಾಹರಣೆ
  12. ಭಯದ ಕರಿನೆರಳನ್ನು ದಾಟಿ... ... ...     
  13. ರೂಪ ರೂಪಗಳನು ದಾಟಿ... ...      ...     
  14. ಬದುಕು... ನಿನ್ನಲ್ಲೆಂಥ ಮುನಿಸು... ...      ...
  15. ಬಿಡದೆ ಮುಂದೆ ನಡೆಯುವ ನಾವು... ...      ...
  16. ಹಚ್ಚೋಣ ಹಣತೆಗಳ... ...      ...
  17. ಇರುವುದೆಲ್ಲವ ನೆನೆದು... ...      ...
  18. ಜಗದ ಸಂತೆಯಲಿ ಮನೆಯ ಮಾಡಿ... ... ...
  19. ಆದದ್ದೆಲ್ಲ ಒಳಿತೇ ಆಯಿತು... ...      ...     
  20. ನೆನಪಿರಲಿ ಬಡವರಿದ್ದಾರೆ... ...      ...     
  21. ನಕ್ಕು ಗುಣವಾದವರು... ...      ...     
  22. ಬದುಕು ಬದಲಾದಾಗ... ...      ...     
  23. ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು... ...
  24. ಹಂಚಿ ಹಗುರಾದವರು... ...      ...     
  25. ಕಣ್ಣು ತೆರೆದಾಗಲೇ ಬೆಳಗು... ...      ...     
  26. ಏನಾದರೂ ಮಾಡಿ, ದೂರಬೇಡಿ... ...     
  27. ಕೊಟ್ಟು ಗಳಿಸಿದವರು...       ...      ...     
  28. ಮರಳಿ ಬದುಕಿಗೆ ಈ ಪಯಣ... ...     
  29. ಕಾಸಿಲ್ಲದೆ ಕಲಿತದ್ದು... ... ...     
  30. ಕ್ಷಮಿಸಬಹುದೆ...? ...      ...     
  31. ಪರಿಹಾರವಿದೆ ನಮ್ಮ ಕೈಯಲ್ಲಿ... ...      ...     
  32. ಜಗ್ಗದಿರಿ ಹಗ್ಗವನ್ನು... ...      ...     
  33. ಬೇರಿಳಿಸಿ ಹಾರುವ ಪರಿ... ...      ...     
  34. ಭಾರತೀಯರೆಂಬ ಅಭಿಮಾನವಿರಲಿ... ... ...     
  35. ದುಡಿಯಬಲ್ಲೆವು ನಾವು... ...      ...     
  36. ನೀರು ಕೊಡದ ನಾಡಿನಲ್ಲಿ... ...      ...     
  37. ಅಂD ಅನುಕರಣೆಯ ಬಿಟ್ಟು... ...      ...     
  38. ನಮ್ಮ ನಾಳೆಗಳಿಗಾಗಿ...      ...      ...     
  39. ಚಿಗುರಿಸಿ ಕನಸುಗಳನ್ನು... ...      ...     
  40. ನಾಳೆ ಮಾಡೋಣ... ...      ...     
  41. ಬದುಕು ಬರಿದಾಗದಿರಲಿ... ...      ...     
  42. ಭ್ರಮಾಲೋಕದಾಚೆಗೆ... ...      ...     
  43. ಜಗತ್ತು ಹಸಿರಾಗಬಹುದು... ...      ...     
  44. ಬನ್ನಿ ಸಾಧನೆಯ ರಂಗಕ್ಕೆ ... ...      ...     
  45. ಮತ್ತೆ ಭೇಟಿಯಾಗೋಣ... ...      ...     



ಪುಸ್ತಕದ ಕಿರು ಪರಿಚಯದ ವಿಡಿಯೋ ಇಲ್ಲಿದೆ:


  

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.