ಮರಿ ಕುದುರೆಯ ಮೈಸೂರು ಕನಸು

ಮರಿ ಕುದುರೆಯ ಮೈಸೂರು ಕನಸು

Regular price
$4.49
Sale price
$4.49
Regular price
Sold out
Unit price
per 
Shipping does not apply

ಲೇಖಕರು:


ಕ್ಲಿಂಗ್ ಜಾನ್ಸನ್

ಕನ್ನಡ ರೂಪಾಂತರ ಡಾ|| ಮಹಾಬಲೇಶ್ವರ ರಾವ್

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications 

 

ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಕಥೆಯ ನಾಗಾಲೋಟ. ಉದಕಮಂಡಲದಿಂದ ಪ್ರಾರಂಭವಾದ ಮರಿ ಕುದುರೆ ಕ್ಲೀಯ ಕನಸಿನ ಪಯಣ ಮರಳಿ ಉದಕಮಂಡಲಕ್ಕೆ ಹೊರಡುವ ತನಕ ಶರವೇಗದಲ್ಲಿ ಸಾಗುತ್ತದೆ. ಈ ಪಯಣದಲ್ಲಿ ಅಗ್ನಿಶಾಮಕ ದಳದವರು, ಕಾಳಿಂಗ ಸರ್ಪಗಳು, ಬೀರಪ್ಪನ್ ಹಾಗೂ ಅವನ ಸಹಚರರು, ಸುಭದ್ರಾ ಎಂಬ ಆನೆ, ಕಾಡಿನ ಅಧಿಕಾರಿಗಳು, ಹೇಸರಗತ್ತೆಗಳು, ಮೈಸೂರು ಅರಮನೆ, ಅಲ್ಲಿನ ರಾಜ ಸೇವಕರು, ರಾಜ, ರಾಣಿ, ರಾಜಮಾತೆ, ನಗರದ ರಸ್ತೆಗಳು, ದಸರೆಯ ಉತ್ಸವ ಹಾಗೂ ಜನಸಾಗರ ಎಲ್ಲವೂ ಪಾತ್ರಗಳಾಗಿ ಬಂದುಹೋಗುತ್ತವೆ.

ವಿಶೇಷ ಸಂಗತಿ ಎಂದರೆ ‘ಪಂಚತಂತ್ರ’ದ ಕತೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪ್ರಾಣಿ ಪಕ್ಷಿಗಳು ತಮ್ಮ ತಮ್ಮಲ್ಲಿ ಮಾತನಾಡುವುದರ ಜೊತೆಗೆ ಮನುಷ್ಯರ ಜೊತೆಗೂ ಮಾತನಾಡುತ್ತವೆ; ಮನುಷ್ಯರೂ ಈ ಪ್ರಾಣಿಗಳ ಜೊತೆ ಪ್ರೀತಿ ಸ್ನೇಹದಿಂದ ಮಾತನಾಡುತ್ತಾರೆ. ಬಹಳ ಮುಖ್ಯವಾದ ಸಂಗತಿ ಎಂದರೆ ಇಂದು ಮನುಷ್ಯರಲ್ಲಿ ಬಹಳ ವಿರಳವಾಗಿರುವ ಪ್ರೀತಿ ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿನ ಪ್ರಾಣಿಗಳಲ್ಲಿ ಎದ್ದುಕಾಣುತ್ತದೆ. ಆನೆಯಾಗಲಿ, ಸಿಂಹವಾಗಲಿ, ಸರ್ಪವಾಗಲಿ ಇಲ್ಲಿ ದ್ವೇಷವನ್ನು ಕಾರುವುದಿಲ್ಲ. ಬದಲಾಗಿ ಒಂದು ಇನ್ನೊಂದರ ಜೊತೆ ಪೂರ್ಣ ಮನಸ್ಸಿನಿಂದ ಸಹಕರಿಸುತ್ತದೆ. ಪ್ರಾಯಃ ಈ ಮೌಲ್ಯವನ್ನು ನಾವು ಮನುಷ್ಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕಾದಂಬರಿಕಾರರು ಸೂಚಿಸುತ್ತಿರುವಂತಿದೆ. ಸಂಕಲ್ಪ ಬಲ, ಕಠಿಣ ಪರಿಶ್ರಮ, ಎಡರುತೊಡರುಗಳನ್ನು ಎದುರಿಸುವ ಛಾತಿಯಿದ್ದರೆ ಕಂಡ ಕನಸುಗಳನ್ನು ನನಸು ಮಾಡಬಹುದು, ಇಲ್ಲಿ ಯಾವುದೂ ಅಸಾಧ್ಯವಲ್ಲವೆಂದು ಕಾದಂಬರಿಕಾರರು ಈ ಕಾದಂಬರಿಯ ಮುಖೇನ ಬೊಟ್ಟಿಟ್ಟು ತೋರುತ್ತಿದ್ದಾರೆ ಎಂದು ಭಾಸವಾಗುತ್ತದೆ.

 

- ಮಹಾಬಲೇಶ್ವರ ರಾವ್

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !