![ಪ್ರಾಣಿ-ಪಕ್ಷಿಗಳ ಕಥೆಗಳು (ಆಡಿಯೋ ಬುಕ್)](http://mylangbooks.com/cdn/shop/products/PranipakshiAudioCover_{width}x.jpg?v=1646208989)
ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 05 ನಿಮಿಷ
ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿರುವ ‘ಪ್ರಾಣಿ-ಪಕ್ಷಿಗಳ ಕಥೆಗಳು’ ಒಂದು ವಿಶಿಷ್ಟ ಕಥಾಸಂಕಲನ.
ಇಲ್ಲಿ ಪ್ರಾಣಿಗಳು ಪರಸ್ಪರ ಗೆಳೆಯರಾಗಿ, ನೆರೆಹೊರೆಯವರಾಗಿ ಬಾಳುತ್ತವೆ. ಮನುಷ್ಯರಂತೆ ಆಲೋಚಿಸುತ್ತವೆ. ಇವುಗಳಿಗೂ ಕಷ್ಟ , ಸುಖ, ದುಃಖ ಉಂಟು. ಕಷ್ಟದ ಸಂದರ್ಭ ಒದಗಿದಾಗ ತಂತ್ರಗಾರಿಕೆಯಿಂದ ನಿಭಾಯಿಸಿಕೊಳ್ಳಬಲ್ಲವು. ವಂಚನೆ, ಕುತಂತ್ರವನ್ನು ಸಹ ಇವು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳುವುದುಂಟು. ತಮ್ಮ ನಡವಳಿಕೆಯ ಮೂಲಕ ಮನುಷ್ಯರಿಗೂ ನೀತಿಪಾಠ ಹೇಳಬಲ್ಲವು.
ಇದು ಪ್ರಾಣಿ-ಪಕ್ಷಿಗಳ ಕಥಾ ಪ್ರಪಂಚ. ಚಿತ್ರಗಾರರಾದ ಶ್ರೀ ಹರಿಣಿ ಸೂಕ್ತ ಸಂದರ್ಭೋಚಿತ ಚಿತ್ರಗಳನ್ನು ಬಿಡಿಸಿ ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ಮಕ್ಕಳ ಕಥಾಸಾಹಿತ್ಯದಲ್ಲಿ ಹೆಸರು ಮಾಡಿರುವ ಗಣೇಶ ಪಿ. ನಾಡೋರ, ನೀಲಾಂಬರಿ, ಜಂಬುನಾಥ ಕಂಚ್ಯಾಣಿ, ಪಳಕಳ ಸೀತಾರಾಮ ಭಟ್ಟ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ದು. ನಿಂ. ಬೆಳಗಲಿ ಇವರುಗಳು ರಚಿಸಿರುವ ಕಥೆಗಳನ್ನು ಆಯ್ದು ಸಂಕಲಿಸಲಾಗಿದೆ.
ಮಕ್ಕಳೇ ನೀವು ಈ ಕಥೆಗಳನ್ನು ಓದಿ, ಆನಂದಿಸಿ ನಿಮ್ಮ ಸ್ನೇಹಿತರಿಗೂ ಹೇಳಿ. ಇದೇ ಮಾಲೆಯಲ್ಲಿ ಜಾಣ ಕಥೆಗಳು, ನೀತಿ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದ ಕಥಾ ಸಂಕಲನಗಳೂ ಬರಲಿವೆ. ಅವುಗಳೂ ನಿಮ್ಮ ಕುತೂಹಲ, ಜಾಣ್ಮೆಯನ್ನು ಹೆಚ್ಚಿಸಲಿ ಎಂಬುದೇ ನಮ್ಮ ಆಶಯ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
ವಿವರಗಳು
- ಹಸಿವು ಗಣೇಶ ಪಿ. ನಾಡೋರ
- ಕರಡಿ, ಸಿಂಹ ಮತ್ತು ಕಾಗೆ ಗಣೇಶ ಪಿ. ನಾಡೋರ
- ಕಾಡಿನಲ್ಲಿ ರೇಷನ್ ಅಂಗಡಿ ಪ. ರಾಮಕೃಷ್ಣ ಶಾಸ್ತ್ರಿ
- ಹಾವು ಮಾಡಿದ ಮೋಸ ಗಣೇಶ ಪಿ. ನಾಡೋರ
- ತೋಳದ ಕುತಂತ್ರ ಗಣೇಶ ಪಿ. ನಾಡೋರ
- ಮೂರ್ಖ ಕಾಗೆ ಗಣೇಶ ಪಿ. ನಾಡೋರ
- ಮೊಲದ ಮರಿಯೂ ಚಿರತೆ ಮರಿಯೂ ಗಣೇಶ ಪಿ. ನಾಡೋರ
- ಬದುಕುವ ಹಕ್ಕು ಗಣೇಶ ಪಿ. ನಾಡೋರ
- ಮೋಸಹೋದ ಕಾಗೆ ಗಣೇಶ ಪಿ. ನಾಡೋರ
- ಸುಂದರ ಕಾಡಿಗೆ ಗಣೇಶ ಪಿ. ನಾಡೋರ
- ಕಾಗೆಯ ಉಪಕಾರ ಗಣೇಶ ಪಿ. ನಾಡೋರ
- ಪಾರಿವಾಳ, ಕಾಗೆ ಮತ್ತು ಹದ್ದುಗಳು ಗಣೇಶ ಪಿ. ನಾಡೋರ
- ಕರಡಿ, ಮಂಗ, ನರಿ ಗಣೇಶ ಪಿ. ನಾಡೋರ
- ದುರಹಂಕಾರಿ ಹಂದಿ ಗಣೇಶ ಪಿ. ನಾಡೋರ
- ಹಗಲುಗುರುಡು ಗಣೇಶ ಪಿ. ನಾಡೋರ
- ಗುಬ್ಬಿ ಮತ್ತು ಕಾಗೆ ಗಣೇಶ ಪಿ. ನಾಡೋರ
- ಮೂರ್ಖ ಮೀನುಗಳು ಗಣೇಶ ಪಿ. ನಾಡೋರ
- ಬೆಕ್ಕಿನ ಮರಿ ಮತ್ತು ಗಿಳಿ ಗಣೇಶ ಪಿ. ನಾಡೋರ
- ಹುಲಿಗೆವ್ವನ ಸ್ವಭಾವ ಬದಲಾದದ್ದು ನೀಲಾಂಬರಿ
- ನಂಬಿ ಕೆಟ್ಟ ಹುಂಜಣ್ಣ ಜಂಬುನಾಥ ಕಂಚ್ಯಾಣಿ
- ಮೊಲದ ಮರಿಯೂ ಹುಲಿ ಮರಿಯೂ ಗಣೇಶ ಪಿ. ನಾಡೋರ
- ಬೆಕ್ಕಿನ ಮರಿ ಹಕ್ಕಿಯಾಯಿತೇ ? ಪಳಕಳ ಸೀತಾರಾಮ ಭಟ್ಟ
- ಕಾಗಕ್ಕ-ಗುಬ್ಬಕ್ಕ ಪಾರ್ವತಮ್ಮ ಮಹಲಿಂಗ ಶೆಟ್ಟಿ
- ಪುರುಷನ ಚಿತ್ತ ದು. ನಿಂ. ಬೆಳಗಲಿ