ಬದುಕು ಬದಲಿಸಬಹುದು - 2 -  ಸಾವೇ, ಬರುವುದಿದ್ದರೆ ನಾಳೆ ಬಾ! ಭಾಗ - 1 (ಆಡಿಯೋ ಬುಕ್)

ಬದುಕು ಬದಲಿಸಬಹುದು - 2 - ಸಾವೇ, ಬರುವುದಿದ್ದರೆ ನಾಳೆ ಬಾ! ಭಾಗ - 1 (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ.

ಓದಿದವರು ಮತ್ತು ಬರೆದವರು:

ನೇಮಿಚಂದ್ರ 

ನಿರ್ಮಾಣ ಸಹಾಯ : ಧ್ವನಿಧಾರೆ ತಂಡ

ಆಡಿಯೋ ಪುಸ್ತಕದ ಅವಧಿ : 4 ಗಂಟೆಗಳು 37 ನಿಮಿಷ

 

ಬದುಕು ಪ್ರೀತಿಯ ಈ ಸಂಕಲನ :
‘ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಮ್ಮಲ್ಲಿಯೇ ಇದೆ ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ.
‘ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ’ ಎಂಬ ಭರವಸೆಯ ಲೇಖನಗಳು ಇಲ್ಲಿವೆ.
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಇವರ 'ನೋವಿಗದ್ದಿದ ಕುಂಚ', ‘ಪೆರುವಿನ ಪವಿತ್ರ ಕಣಿವೆಯಲ್ಲಿ', ‘ಯಾದ್ ವಶೇಮ್', ‘ದುಡಿವ ಹಾದಿಯಲಿ ಜೊತೆಯಾಗಿ', ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು', ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು', ‘ಬದುಕು ಬದಲಿಸಿದ ಭಾವೇಶ್ ಭಾಟಿಯಾ', `ಬದುಕು ಬದಲಿಸಬಹುದು' (ಭಾಗ- ೧), ‘ಸೋಲೆಂಬುದು ಅಲ್ಪವಿರಾಮ’(ಬದುಕು ಬದಲಿಸಬಹುದು, ಭಾಗ-೩) ಮತ್ತು ‘ಸಂತಸ, ನನ್ನೆದೆಯ ಹಾಡು ಹಕ್ಕಿ’(ಬದುಕು ಬದಲಿಸಬಹುದು, ಭಾಗ-೪) ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

ಅಧ್ಯಾಯಗಳು

1. ಸಾವೇ, ಬರುವುದಿದ್ದರೆ ನಾಳೆ ಬಾ!
2. ನಮ್ಮ ಅದೃಷ್ಟ ಬದಲಾಗಬಲ್ಲದು!
3. ನೀರು - ಸರ್ವರೋಗ ನಿವಾರಕ
4. ದೀರ್ಘಾಯುಷ್ಯದ ಗುಟ್ಟು!
5. ಬದುಕು ನಿಲ್ಲಲಿಲ್ಲ ಅಲ್ಲಿಗೇ...
6. ಬೆಳ್ಳುಳ್ಳಿ - ಔಷಧಿಗಳ ಸಹಜ ಸಾಗರ
7. ಒಂದು ಕಂದನ ಕಥೆ
8. ವಿಧಿ ಬರೆದ ಬರಹವನು ಅಳಿಸಿ...
9. ಜಗವ ಎದುರಿಸುವ ಸ್ಥೈರ್ಯ
10. ಮಿದುಳು ಮತ್ತೆ ಕಲಿಯಬಲ್ಲದು
11. ಹಸಿರ ನೆಡೋಣ, ಖುಷಿಯ ನೆಡೋಣ
12. ಅವರು ಮಡಿದರು ನಮಗಾಗಿ...
13. ಸಾವಿನಾಚೆಗೂ ಬದುಕಿದವರು
14. ತಾಯಾದಳು ಹುಡುಗಿ, 52 ಮಕ್ಕಳಿಗೆ
15. ನಾನು ಬೇಕೆಂಬಷ್ಟು ಜೀವಿಸಿದೆನೆ, ಸಾಕೆಂಬಷ್ಟು ಪ್ರೀತಿಸಿದೆನೆ ?
16. ಕನಸು ಕಾಣದಿದ್ದರೆ, ಅವು ನನಸಾಗುವುದು ಹೇಗೆ?
17. ಅಂತರಂಗದ ಪಯಣ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.