ಶೂದ್ರತಪಸ್ವಿ

ಶೂದ್ರತಪಸ್ವಿ

Regular price
$1.49
Sale price
$1.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಮಹಾಕಾವ್ಯವಾದ ವಾಲ್ಮಿಕಿ ರಾಮಾಯಣದಲ್ಲೂ ಆಗಿನ ಕಾಲದ ಮನಸ್ಥಿತಿಯ ಅನೇಕ ಲೋಪದೋಷಗಳಿದ್ದು ಅದರಲ್ಲಿ ವರ್ಣಬೇಧವೂ ಒಂದಾಗಿದೆ.‌ ಇಂತಹ ಒಂದು ಅಲ್ಪದೃಷ್ಟಿಯನ್ನು ಶಂಬೂಕವಧಪ್ರಸಂಗದಲ್ಲಿ ನೋಡಬಹುದು. ಬರೀ ಇದಷ್ಟೆ ಕಾರಣಗಳಿಂದ ಕೃತಿಯನ್ನು ತಿರಸ್ಕರಿಸದೆ ಅದಕ್ಕೆ ಬೇರೊಂದೆ ರೂಪವ ಕೊಟ್ಟಾಗ ಆಗಿದ್ದೆ ಕುವೆಂಪುರವರ "ಶ್ರೀರಾಮಯಣದರ್ಶನಂ".
ವಾಲ್ಮಿಕೀ ರಾಮಯಣದಲ್ಲಿ ಬರುವ ಶಂಬೂಕವಧಪ್ರಸಂಗ ಇಂತಿದೆ:
ಒಬ್ಬ ಬ್ರಾಹ್ಮಣನು ತನ್ನ ಕುಮಾರನ ಅಕಾಲ ಮರಣವನ್ನು ಒಪ್ಪದೆ ಶ್ರೀರಾಮನ ಬಳಿ ಬಂದು ಗೋಳಾಡಿ ಅದಕ್ಕೆ ದೊರೆಯ ದೋಷವನ್ನೆ ಕಾರಣ ಒಡ್ಡುತ್ತಾನೆ. ಶ್ರೀರಾಮನು ಇದರ ಬಗ್ಗೆ ಮಂತ್ರಿಮಂಡಲದಲ್ಲಿ ಚರ್ಚಿಸುವಾಗ ಒಬ್ಬ ನಾರದನು ಓರ್ವ ಶೂದ್ರ ತಪಸ್ಸು ಮಾಡುತಿದ್ದಾನೆ ಅದರ ಪರಿಣಾಮವೇ ಈ ಅಕಾಲಮರಣಕ್ಕೆ ಕಾರಣವೆಂದು ಸಿದ್ಧಾಂತವನ್ನು ಮಂಡಿಸುತ್ತಾನೆ. ಇದನ್ನು ಕೇಳಿದ ರಾಮನು ದಕ್ಷಿಣಕ್ಕೆ ಬಂದು ಶಂಬೂಕ ಮಹರ್ಷಿಗೆ ನಮಸ್ಕರಿಸುತ್ತಲೆ ನೀನು ಯಾವ ವರ್ಣವೆಂದು ಪ್ರಶ್ನಿಸುತ್ತಾನೆ.‌ ಶಂಬೂಕ ತಾನು ಶೂದ್ರನೆಂದು ಹೇಳುತ್ತಿದಂತೆಯೇ ರಾಮನ ಖಡ್ಗ ಶಂಬೂಕನ ರುಂಡವ ಧರೆಗುರುಳಿಸುತ್ತದೆ.
ಇದಿಷ್ಟು ಮೂಲ ರಾಮಾಯಣದ ಕಥೆಯಾದರೆ, ಇದನ್ನು ಸಮರ್ಥ ಪಡಿಸಲೆಂದೆ "ಉತ್ತರ ರಾಮಚರಿತ" ಕಾವ್ಯ ರಚಿತವಾಗಿದೆಂದೆನಿಸುತ್ತದೆ.
ಇದರಲ್ಲಿ ಶಂಬೂಕನ ಶಿರಚ್ಛೇದನವಾದ ನಂತರ ಮೃತ ದೇಹದಿಂದ ಗಾಂಧರ್ವ ವಾಣಿಯೊಂದು ರಾಮನಿಗೆ ಧನ್ಯವಾದಿಸುತ್ತ ಪೂರ್ವಜನ್ಮದಲ್ಲಿ ತಾನೊಂದು ಘೋರಪಾಪವನ್ನು ಮಾಡಿದ್ದು ಅದಕ್ಕೆ ಶಿಕ್ಷೆಯೆಂದು ಶೂದ್ರನಾಗಿ ಹುಟ್ಟಿದ್ದು ಸಜ್ಜನನಾದ ನಿನ್ನಿಂದ(ಶ್ರೀರಾಮ) ಮೋಕ್ಷ ಸಿಕ್ಕಿತೆಂದು ಹೇಳುತ್ತದೆ.
[ಇದರಿಂದ ಕೊಂದಿರುವುದನ್ನು ಸಮರ್ಥ ಪಡಿಸಿಕೊಂಡರೂ, ಶೂದ್ರನಾಗಿ ಹುಟ್ಟುವುದೇ ಶಿಕ್ಷೆ ಎಂಬಂತ್ತಿದೆ]
ಈ ಪ್ರಸಂಗವನ್ನು ಕುವೆಂಪುರವರು ತಮ್ಮ "ಶೂದ್ರತಪಸ್ವಿ" ನಾಟಕ ಕೃತಿಯಲ್ಲಿ ಹೊಸದೊಂದು ದೃಶ್ಯವನ್ನು ಕಟ್ಟಿಕೊಡುತ್ತಾರೆ. ಇದರಲ್ಲಿ ಮೃತ್ಯುಗೂ ಒಂದು ಪಾತ್ರವಿದೆ.
ಶಂಬೂಕ ಮಹರ್ಷಿಯ ಆಶ್ರಮಕ್ಕೆ ರಾಮ ಬರುವ ಮುನ್ನವೇ ಮೃತ್ಯು ಬಂದು ತನ್ನ ಆಹಾರಕ್ಕಾಗಿ ಕಾದು ಕುಳಿತಿರುತ್ತದೆ. ರಾಮನು ಮತ್ತು ಬ್ರಾಹ್ಮಣನು ಬಂದ ನಂತರ ಬ್ರಾಹ್ಮಣನ ಸಲಹೆಯಂತೆ ಶ್ರೀರಾಮನು ತನ್ನ ಬ್ರಹ್ಮಾಸ್ತ್ರವನ್ನು "ಅರಸಿ ಕೊಲ್ ಅರಗುಲಿಯನ್" ಎಂದು ಅಘೋಷಿಸಿ ಸೆಳೆದು ಬಿಡುತ್ತಾನೆ. ಮಿಂಚು ತಳಿಸುತ್ತದೆ. ಸಿಡಿಲೆರಗುತ್ತದೆ. ಬಿರುಗಾಳಿ ಭೋರಿಡುತ್ತದೆ. ಮೃತ್ಯುವಿನ ಕರಾಳಛಾಯೆ ರೌದ್ರರೋಷದಿಂದಲೂ ಶರವೇಗದಿಂದಲೂ ಅಸ್ತ್ರವನ್ನು ಹಿಂಬಾಲಿಸುತ್ತದೆ.‌ ತಪಸ್ವಿಯ ಸಮೀಪಿಸುತ್ತಿದ್ದಂತೆಯೆ ಬ್ರಹ್ಮಾಸ್ತ್ರ ತನ್ನ ಉಗ್ರತೆಯನ್ನುಳಿದು ವಿನೀತವಾಗಿ ಅಡ್ಡ ಬೀಳುತ್ತದೆ. ಮೃತ್ಯುವೂ ಅದನ್ನೆ ಅನುಕರಿಸುತ್ತದೆ. ಇದನ್ನು ನೋಡಿ ಬೆಚ್ಚಿದ ಬ್ರಾಹ್ಮಣನಿಗೆ ಶ್ರೀರಾಮನು ಮುಗುಳುನಗುತ್ತ ಹೇಳುತ್ತಾನೆ "ಆಹಾ... ಏನಿದು ಆಶ್ಚರ್ಯ.. ಋಷಿಮುನಿಗೆ ಮರ್ಯಾದೆ ಸಲ್ಲಿಸಿ ದಿಕ್ಕನ್ನು ಬದಲಿಸುತ್ತಿದೆ ಬ್ರಹ್ಮಾಸ್ತ್ರ."
ಬ್ರಾಹ್ಮಣನು ಅಚ್ಚರಿಯಿಂದ ಯಾರತ್ತ ಸಾಗುತ್ತಿದೆ ಎಂದು ಕೇಳಿದಾಗ ಶ್ರೀರಾಮನು ಬ್ರಾಹ್ಮಣನ ಕಡೆಗೆ ನೋಡದೆ ದಿಟ್ಟವಾಗಿ ದರ್ಪಧ್ವನಿಯಿಂದ "ಪೂಜ್ಯರನ್ನು ಅನುಮಾನಿಸಿ ಅವಹೇಳನ ಮಾಡಿದವನ ಕಡೆಗೆ, ಅಧರ್ಮಿಯ ಕಡೆಗೆ"‌ ಎಂದೆನ್ನುತ್ತಾನೆ. ಬ್ರಾಹ್ಮಣನಿಗೆ ತನ್ನ ತಪ್ಪಿನ ಅರಿವಾಗಿ ಶ್ರೀರಾಮನಲ್ಲಿ ಕ್ಷಮೆಯಾಚಿಸಿ ರಕ್ಷಿಸು ಧರ್ಮ ಪ್ರಭುವೆ ಎಂದು ಬೇಡುತ್ತಾನೆ.
"ತಪಸ್ಸು (ಶಕ್ತಿ/ಶಿಕ್ಷಣ) ಯಾವುದೋ ಒಂದೇ ವರ್ಣದ ಸ್ವತ್ತಲ್ಲ ಎಲ್ಲರಿಗೂ ಲಭಿಸುವಂತಾಗಬೇಕು. ಅದೇ ಧರ್ಮ" ಎಂದು ನಿಧಾನ ದ್ವನಿಯಿಂದ ಹೇಳುತ್ತಾ ಧರ್ಮದ ಬಗ್ಗೆ ಇದ್ದ ಅಲ್ಪಬುದ್ಧಿಯನ್ನು ಬ್ರಾಹ್ಮಣನಿಂದ ಹೋಗಿಸಿ ಬ್ರಾಹ್ಮಣ ಕುಮಾರನನ್ನು ಬದುಕಿಸಿಕೊಡುತ್ತಾನೆ. ಆನಂತರ ಮೃತ್ಯು ಉಪವಾಸದಿಂದ ಹೋಗುತ್ತಾನೆ.
ಈ ಕೃತಿಯ ವಿಶೇಷವೇನೆಂದರೆ ಆಗಾಗಲೇ ದೈವಭಾವ ಮೂಡಿಸಿದ್ದ ಶ್ರೀರಾಮನ ಪಾತ್ರವು ಏನೇ ಮಾಡಿದರು ಒಳ್ಳೆಯದ್ದೆ ಮಾಡಿರುತ್ತದೆ(ಮಾಡುತ್ತದೆ) ಎಂದು ನಂಬುವ ಅವಿವೇಕರ ಅತೀ ಶ್ರದ್ಧೆಯಲ್ಲಿ, ಶ್ರದ್ಧೆ ಭಕ್ತಿಗೆ ಧಕ್ಕೆ ತರದೇ ಅವಿವೇಕತವನ್ನು ಮಾತ್ರ ತಿದ್ದಿ, ಮೂಲ ಕೃತಿಯಲ್ಲಿ ಮತ್ತು ರಾಮನ ಪಾತ್ರದಲ್ಲಿ ನಿಷ್ಠೆಯನ್ನು ಮತ್ತಷ್ಟು ಪುನರ್ಚೇತನವನ್ನು ತಂದಿರುವ ಕುವುಂಪೆರವರ ಜಾಣ್ಮೆ. ಅವರ ಈ ಜಾಣ್ಮೆಗೆ ಸಂದ ಜ್ಞಾನಪೀಠ ಪ್ರಶಸ್ತಿಯ ಗೌರವವು ನಿಜಕ್ಕೂ ಅವಿಸ್ಮರಣೀಯ.

- ಪ್ರವೀಣ್ ಶ್ರೀನಿವಾಸ್ https://www.facebook.com/kvputtappa/posts/826867330839028/

 

ಪುಟಗಳು: 40

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !