
ಶಶಿ ತರೀಕೆರೆ ಅವರ ಈ ಕಥಾಸಂಕಲನವು "ಛಂದ ಪುಸ್ತಕ" ಬಹುಮಾನವನ್ನು ಪಡೆದಿದೆ. ಹಿರಿಯ ಕವಿ ಲಲಿತಾ ಸಿದ್ಧಬಸವಯ್ಯನವರು ಈ ಕೃತಿಯನ್ನು ಆಯ್ಕೆಮಾಡಿ ಬರೆದ ಸೊಗಸಾದ ಮುನ್ನುಡಿಯೂ ಇದರಲ್ಲಿ ಅಡಗಿದೆ. ಈ ಕತೆಗಾರನಿಗೆ ಸಂಕಲನದ ಕತೆಯೊಂದಕ್ಕೆ ಟೋಟೋ ಪ್ರಶಸ್ತಿಯೂ ಲಭ್ಯವಾಯ್ತು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಶಶಿ, ಜನಿಸಿದ್ದು 1990ರಲ್ಲಿ. ಸದ್ಯಕ್ಕೆ ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಕವಿತೆ, ಕತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನ ಇವರ ಹವ್ಯಾಸಗಳಾಗಿವೆ. ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಮತ್ತು ಹಲವು ದಿನಪತ್ರಿಕೆಗಳಲ್ಲಿ, ಮಯೂರ, ಮಂಗಳ, ತರಂಗ ಮತ್ತು ಇನ್ನಿತರೆ ನಿಯತಕಾಲಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಇದು ಇವರ ಮೊದಲ ಕಥಾಸಂಕಲನ.
ಪುಟಗಳು : 108